Monday, February 25, 2008

ಗಾಂಧಿ ಜಯಂತಿ ಮತ್ತು ಗಾಂಧಿ


ಗಾಂಧಿ ಇಂದಿಗೂ ಪ್ರಸ್ತುತ ಎನ್ನುವ ಮಾತಿದೆ.ಆದರೆ ಇತ್ತೀಚಿನ ಘಟನೆಗಳು ಇದಕ್ಕೆ ವ್ಯತಿರಿಕ್ತ ಅನ್ನಿಸುತ್ತದೆ.ಇದಕ್ಕೆ ಪೂರಕವಾಗಿ ನಿಂತದ್ದು ಮೊನ್ನೆ ನಡೆದ ಗಾಂಧಿ ಜಯಂತಿ ನಾಟಕ ಪ್ರದರ್ಶನ.ವಾಸ್ತವತೆಗೆ ಕನ್ನಡಿ ಹಿಡಿದ ನಾಟಕವನ್ನು ತೆಲುಗಿನಿಂದ ಕನ್ನಡಕ್ಕೆ ತರಲಾಗಿದೆ.ಗಾಂಧಿ,ಸ್ವಾತಂತ್ರ್ಯ ನಂತರದ ಭಾರತವನ್ನು ಕಂಡು ಆತಂಕಗೊಳ್ಳುವುದೇ ನಾಟಕದ ಕಥಾ ವಸ್ತು.

ಪ್ರಾರಂಭ


ಭಾರತಕ್ಕೆ ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟು ತಪ್ಪು ಮಾಡಿದರು.ಇದು ಮಹಾಪಾಪ,ಇದು ಯಮಲೋಕದಲ್ಲಿರುವ ಅಪಾದನೆ.ಚಿತ್ರಗುಪ್ತನ ಆರೋಪ.ಇದಕ್ಕಾಗಿ ಗಾಂಧೀಜಿಗೆ ಶಿಕ್ಷೆ ಕೂಡಾ ಪ್ರಾಪ್ತಿಯಾಗುತ್ತದೆ. ಮತ್ತೆ ಭೂಲೋಕದಲ್ಲಿ 1 ತಿಂಗಳ ಕಾಲ ಮಹಾತ್ಮ ಭೂಲೋಕದಲ್ಲಿ ಜೀವಿಸಬೇಕು. ಹೀಗೆ ಭೂಲೋಕದಲ್ಲಿ ಕಾಣಿಸಿಕೊಳ್ಳುವ ಗಾಂಧೀಜಿಯನ್ನು ಗಾಂಧಿ ಎಂದು ಒಪ್ಪಿಕೊಳ್ಳಲು ಯಾರು ಸಿದ್ಧರಿಲ್ಲ. ಹೀಗೆ ಮನುಜನ ಕರ್ಮಭೂಮಿಯು ಅನಾವರಣಗೊಳ್ಳುತ್ತ ಸಾಗುತ್ತದೆ.ರಾಜಕಾರಣಿಗಳ ಬೂಟಾಟಿಕೆ, ವಿಧಾನಸಭೆಯಲ್ಲಿ ಜನಪ್ರತಿನಿಧಿಗಳ ನಾಟಕ ಎಲ್ಲವೂ ಬಟ್ಟೆ ಕಳಚಿಕೊಳ್ಳುತ್ತದೆ.
ಅದೊಂದು ಚುನಾವಣೆಯ ಸಂದರ್ಭ ಗಾಂಧಿಯ ಬಳಿಗೆ ಬಂದ ಮತ ಭಿಕ್ಷುಕರು ಮತಕ್ಕಾಗಿ ತಟ್ಟೆ ಹಿಡಿಯುತ್ತಾರೆ.ಅವೆರೆಲ್ಲಾ ಹಿಂತಿರುಗಿದ ಬಳಿಕ ಗಾಂಧಿ ಪ್ರಶ್ನೆಯೊಂದನ್ನು ಕೇಳುತ್ತಾರೆ. 'ನನ್ನ ಹೆಸರೂ ಮತದಾರರ ಪಟ್ಟಿಯಲ್ಲಿ ಇದೆಯಾ.?' ಇದೊಂದು ಮಾತು ಸಾಕು ವಾಸ್ತವದ ನೆರಳಿಗೆ.ಮೊನ್ನೆ ಮೊನ್ನೆ ಚುನಾವಣಾ ಆಯೋಗ ನಡೆಸಿತಲ್ಲ ಮತದಾರರ ಪಟ್ಟಿ ಪರಿಷ್ಕರಣ ಯಾಗ ಇದು ನನ್ನ ಮನಸ್ಸಿನಲ್ಲಿ ತೇಲಿ ಹೋಯಿತು.
ಮುಖ್ಯವಾಗಿ ಹೊಲಸು ರಾಜಕೀಯದ ಬಗ್ಗೆಯೇ ನಾಟಕ ಬೆಳಕು ಚೆಲ್ಲುತ್ತದೆ. ಕಮಿಷನ್ ವ್ಯವಹಾರ, ಮತದಾನ ಅವ್ಯವಹಾರ ,
ಬಜೆಟ್ ಗಾರಿಕೆ ಹೀಗೆ ಬೆಳಕಿನ ಚೆಲ್ಲುತ್ತದೆ.ಕೊನೆಯಲ್ಲಿ ಎಲ್ಲಾ ಘಟನೆಗಳಿಗೂ ಗಾಂಧೀಜಿ ನಿರುತ್ತರರಾಗುತ್ತಾರೆ. ಚಿತ್ರಗುಪ್ತನ ಮಾತು ಅವರ ಕಿವಿಗೆ ಅಪ್ಪಳಿಸುತ್ತದೆ. ಒಟ್ಟಾರೆ ಈ ನಾಟಕ ನನಗೆ ತುಂಬಾ ಇಷ್ಟವಾಯಿತು. ಬೆಳಕು, ನಟನೆ ಇವೆಲ್ಲಾ ಹೊರತುಪಡಿಸಿ ಒಳಗಿನ ಹೂರಣವಿದೆಯಲ್ಲಾ ಅದು ಖುಷಿ ತಂದುಕೊಟ್ಟಿತು. ತುಂಬಾ ದಿನದ ನಂತರ ರವೀಂದ್ರ ಕಲಾಕ್ಷೇತ್ರ ಮನಸ್ಸಿಗೆ ಮುದ ನೀಡಿತು. ನನ್ನ ಸಂತೋಷವನ್ನು ಹಂಚಿಕೊಂಡಿದ್ದೇನೆ.

4 comments:

sunaath said...

ನಾಟಕ ಸೊಗಸಾಗಿದೆ. ಮೂಲ ನಾಟಕ ಬರೆದವರು ಯಾರು, ಅನುವಾದಿಸಿದವರು ಯಾರು? ಬೆಂಗಳೂರಿನಲ್ಲಿ ನಾಟಕ ಆಡಿದವರು ಯಾರು ತಿಳಿಸುವಿರಾ?

Anonymous said...

ee nataka yaaradu tiLisuvirA please?
- Chetana

Sridhar Raju said...

ನಮಸ್ಕಾರ ರಾಧಾಕೃಷ್ಣ ಅವರೇ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: 16 ಮಾರ್ಚ್ 2008
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು


ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

-ಶ್ರೀಧರ

Unknown said...

IDEA CHENNAGIDE