Tuesday, December 2, 2008

ನಮನ - ೨

ಬಾಂಬೆಯ ಸುತ್ತ ರಕ್ತದ ರಂಗೋಲಿ. ಈ ನಗರಕ್ಕೆ ಇದೇನು ಶಾಪ ಅಂದುಕೊಳ್ಳಬೇಕಿದೆ. ನಮ್ಮವರು ಬ್ಲಾಕ್ ಕಮಾಂಡೋ, ನೇವಿ ಮಂದಿ, ಅಗ್ನಿ ಶಾಮಕ ದಳ ಹೀಗೆ ಹಲವು ತಂಡಗಳು ತಮ್ಮವರನ್ನು ಮರೆತು ಹೋರಾಡಿದರು. ನಾವು ಮುಂಜಾನೆ ಪೇಪರ್ ನೋಡಿ ಛೇ ಅಂದೆವು, ಟಿ.ವಿ. ನೋಡಿ ಅಯ್ಯೋ ಅಂದೆವು. ನಾವಾದರು ಏನು ಮಾಡಲು ಸಾಧ್ಯ. ಬಹುಶ ಇಂತಹುದೊಂದು ಕೆಲಸ ಮಾಡಿದ ಹಿರಿಮೆ ನಮ್ಮದು.

http://neelanjala.wordpress.com/

ಸಂದೀಪ್ ಅಂತ್ಯ ಸಂಸ್ಕಾರದಲ್ಲಿ ಧರ್ಮವನ್ನು ಭಾಷೆಯನ್ನು ಗುತ್ತಿಗೆ ಪಡೆದಂತೆ ವರ್ತಿಸುವ ಮಂದಿ ಮಾಡಿದ ವರ್ತನೆ ಮಾತ್ರ ದುರಾದೃಷ್ಟ. ನೀವು ನೋಡಿದ್ದರೆ ನೆನಪಿಸಿಕೊಳ್ಳಿ. ಎಲ್ಲರ ಕಣ್ಣಂಚು ತೇವಗೊಂಡಿತ್ತು. ಭಾರತ ಬಾವುಟ ಹೋರಾಟದ ಕಥೆಗಳನ್ನು ಸಾರಿ ಹೇಳುತ್ತಿತ್ತು. ಆದರೆ ರಕ್ಷಣಾ ವೇದಿಕೆಯ ಮಂದಿ ಕನ್ನಡ ಬಾವುಟವನ್ನು ತ್ರಿವರ್ಣ ಧ್ವಜಕ್ಕಿಂತಲ್ಲೂ ಎತ್ತರಕ್ಕೆ ಹಾರಿಸಿದರು. ತಪ್ಪು ಅಂದವರಿಗೆ ಇದು ಕರ್ನಾಟಕ ಎಂದರು... ಸಂದೀಪ್ ಹೋರಾಡಿದ್ದು ಭಾರತಕ್ಕೆ ಏನ್ನುವುದನ್ನು ಮರೆತರು. ಇನ್ನು ಹಿಂದು ಪರ ಸಂಘಟನೆಗಳು ತಮ್ಮ ಭಗವಾ ಧ್ವಜವನ್ನು ಹೊತ್ತು ತಿರುಗಾಡಿದರು. ಇದು ನಾವು ನೀಡಿದ ಸಲಾಂ.( ತಪ್ಪೇನಿದೆ ಕೇರಳ ಮುಖ್ಯಮಂತ್ರಿಗೆ ಅವಮಾನ ಮಾಡಿದ್ದರಲ್ಲಿ.)

ಇನ್ನು ರಾಜಕಾರಣಿಗಳು ಬಾಯಿ ಬಿಚ್ಚಿದರೆ ಕೋಟಿ ಅಂದರು.ಅದಕ್ಕೆ ಇರಬೇಕು ನಮ್ಮ ಡಿ.ಜಿ. ಸಾಹೇಬರು ಅವಧಿ ಮುಗಿದ ಶಸ್ತ್ರಾಸ್ತ್ರ ಗಳನ್ನು ಪ್ರದರ್ಶಿಸಿದ್ದು.ಒಟ್ಟಾರೆ ಧರ್ಮದ ಆಫೀಮು ಎಲ್ಲವನ್ನು ಕತ್ತಲಾಗಿಸಿದೆ. ನಿನ್ನೆ ಮುಂಬೈ.... ನಾಳೆ ಬೆಂಗಳೂರು ಇರಬಹುದು... ಜವಾಬ್ದಾರಿ ಯಾರು.?