Sunday, August 2, 2009

ಮರು ಪ್ರವೇಶ - ಆರ್ಥಿಕ ಹಿಂಜರಿತದ ನೆಪ

ಹೀಗೆಲ್ಲ ಯಾಕೆ ಆಗುತ್ತೆ ಅನ್ನುವ ಪ್ರಶ್ನೆಗೆ ಉತ್ತರವಿಲ್ಲ.ಕಣಜ ಬರಿದಾಯಿತೆ ಅನ್ನುವ ಆತಂಕ ಕಾಡುತ್ತಿದೆ.ಹಾಗೆನಿಲ್ಲ ಅದದ್ದು ಇಷ್ಟೆ ಭಾರೀ ಸಂಭ್ರಮದಿಂದ ಪ್ರಾರಂಭಗೊಂಡ ಬ್ಲಾಗು ಹೀಗೆ ನೀರಸವಾಯಿತೇ ಎನ್ನುವ ಪ್ರಶ್ನೆಗೆ ಹುಡುಕಾಟ ನಡೆದಿದೆ. ಇದು ನನ್ನ ಒಬ್ಬನ ಪ್ರಶ್ನೆಯಲ್ಲ. ಸುಮಾರು ಬ್ಲಾಗುಗಳು ಅಪ್ ಡೇಟ್ ಭಾಗ್ಯಕ್ಕೆ ಕಾಯುತ್ತಿದೆ.

ನನ್ನ ಪಾಡು: ಇಂದಲ್ಲ,ನಾಳೆ,ನಾಳೆ ಇಲ್ಲ ನಾಡಿದ್ದು ಹೀಗೆ ದಿನ ದೂಡಿ ತಿಂಗಳು ಕಳೆದಿದೆ. ಹೌದು ಸ್ವಾಮಿ ರಿಸಿಷನ್ ಪ್ರಭಾವ. ಗೂಗ್ಲ್ ಕ್ಲಿಕ್ ಮಾಡಬೇಕಾದರೂ only for news ಅನ್ನುವ ಎಚ್ಚರಿಕೆಯ ಗಂಟೆ.ಸೈಬರ್ ಗೆ ಹೋಗೋಣ ಎಂದರೆ ಅಯ್ಯೋ ಟೈಂ ಎಲ್ಲಿದೆ ಮಾರಾಯ. ಅದ್ರೆ ಚಯರ್ ಸವೆಸಿದ ಕ್ಷಣ ಗೊತ್ತಿಲ್ಲದೆ ಸರಿದಿದೆ.

ನನ್ನ ಸ್ವಗತ ೧: laptop ತೆಗೆದು ಬ್ಲಾಗ್ ಅಪ್ ಡೇಟ್ ಮಾಡೋಣ ಎಂದರೆ ಯಾವ ಬ್ಯಾಂಕು ಲೋನ್ ಕೊಡಲ್ಲ. ಬದಲಿಗೆ ನಮ್ಮ ಪಾಲಿಗೆ ಬಾಗಿಲು ಮುಚ್ಚಿರುವ ಬ್ಯಾಂಕ್ ನ ವಾರ್ಷಿಕ ,ಅರ್ಧ ವಾರ್ಷಿಕ ವಹಿವಾಟನ್ನು ಬರೆಯುವುದನ್ನು ತಪ್ಪಿಸುವಂತಿಲ್ಲ. ಎಲ್ಲಿಗೆ ಕಾಲ ಬಂತು ಸ್ವಾಮಿ.
ನನ್ನ ಸ್ವಗತ ೨:ಬಹು ಮಹಡಿ ಕಟ್ಟದಿಂದ ಯಾರೋ ಹಾರಿದರಂತೆ,ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕ್ಯಾಟ್ ವಾಕ್ ಇವೆಲ್ಲ IMP.ಇದರಲ್ಲೇ ಕಾಲ ಕಳೆದು ಹೋಯಿತು.ದಾಲ್ ರೇಟ್ ಜಾಸ್ತಿಯಾಗಿದೆ.ಒಂದು ಚಿಕ್ಕ ದಾಲ್ ಒಳಗಡೆ ಸಾವಿರ ಕಥೆಯಿದೆ.MNC ಕಂಪನಿಗಳು ದಾಲ್ ರೇಟ್ ಗಗನಮುಖಿಯಾಗಲು ಪ್ರಮುಖ ಕಾರಣ.ಆದರೆ ಇವನೆಲ್ಲಾ ನಾವು ಬರೆಯುವ ಹಾಗಿಲ್ಲ.ಅಂದ ಹಾಗೆ ನೀವು ಯಾಕೆ ಅಂತ ಕೇಳುವ ಹಾಗಿಲ್ಲ. ಬ್ಯಾಂಕ್ ಗೂ ದಾಲ್ ಗೆ ಎಂಥಾ ಸಂಬಂಧ ನೋಡಿ.


ಮಿರ್ಚಿಕಾ ಮರ್ಜಿ


ಟಿ.ವಿ ಬಗ್ಗೆ ಪತ್ರಿಕೆಗಳು ಚರ್ಚೆ ನಡೆಸಿತು. ಈಗ ಪತ್ರಿಕೆ ಬಗ್ಗೆ ಪತ್ರಿಕೆಯಲ್ಲೇ ಚರ್ಚೆ ಪ್ರಾರಂಭಗೊಂಡಿದೆ. ಈ ನಡುವೆ ಟಿ.ವಿ ನಲ್ಲಿ ಪೇಪರ್ ಬಗ್ಗೆ ಚರ್ಚೆ ಚರ್ಚೆ ನಡೆಸಲು ಸಿದ್ದತೆ ನಡೆಸಿತು. ಪ್ರೋಮೋ ಬಿಟ್ಟರೆ ಮತ್ತೇನೂ ಅಲ್ಲಿ ಬರಲೇ ಇಲ್ಲ. ಪೇಪರ್ ಬಗ್ಗೆ ಪೇಪರ್ ನಲ್ಲೆ ಚರ್ಚೆ ನಡೆಯಿತು ಅಂತ ಟಿ.ವಿ ನಲ್ಲಿ ಟಿ.ವಿ ಬಗ್ಗೆ ಚರ್ಚೆಯಾಗಲ್ಲ. ಯಾಕೆಂದರೆ ನಮ್ಮದೂ ಅನಿವಾರ್ಯ ಸಹಕಾರ ಸಂಘ ನಿಗಮ ನಿಯಮಿತ.