Saturday, March 10, 2007

ವಾರಾಂತ್ಯದಲ್ಲಿ ಒಂದಿಷ್ಟು ಮಾತು...

ಮತ್ತೊಂದು ವಾರ ಕಳೆದು ಹೋಗಿದೆ. TV 9 ಕಚೇರಿಗೆ ದಾಳಿ ಸೇರಿದಂತೆ ಹಲವು ಬೆಳವಣೆಗೆಗಳು ನಡೆದಿದೆ.ಮಾಧ್ಯಮ ಮಂದಿಯ ಮೇಲೆ ದಾಳಿ ಮಾಮೂಲಿ ನನಗೂ ಇದರ ಅನುಭವಾಗಿದೆ. ಆದರೆ ಕರ್ನಾಟಕದ ಮಟ್ಟಿಗೆ ಈ ದಾಳಿ ಪ್ರಥಮವೇ ಸರಿ. ಇದೊಂದು ಆತಂಕಕಾರಿ ಬೆಳವಣೆಗೆ ಅನ್ನುವುದರಲ್ಲಿ ಎರಡು ಮಾತಿಲ್ಲ.ಮುಂದೆ ಇದು ತೀವ್ರತೆಯನ್ನು ಪಡೆಯದಿದ್ದರೆ ಸಾಕು ಎನ್ನುವುದು ನನ್ನ ಆಶಯ.
ಆದರೆ ಪ್ರಚಾರ ಪಡೆಯುವ ಭರಾಟೆಯಲ್ಲಿ TV9 ಮಾಡಿಕೊಳ್ಳುತ್ತಿರುವ ಎಡವಟ್ಟುಗಳು ಮಾತ್ರ ಒಂದಲ್ಲ, ಎರಡಲ್ಲ. ರಕ್ಷಿತಾ ಮದುವೆ ಈ ಪರಿಯ ಪ್ರಚಾರ ಬೇಕೇ ( ZEE Kannada ) ಹೊರತಾಗಿಲ್ಲ. ಅದರೆ TV 9 ನದ್ದು ಅತೀಯಾಯಿತು. ವರದಿಗಾರ್ತಿಯೊಬ್ಬಳು ಕೇಳಿದ ಪ್ರಶ್ನೆಯಂತ್ತು ......... ನಾ ಹೇಳಲಾರೆ ಬಿಡಿ ನೀವೇ ಕೇಳಿ.

೧. ನಾಳೆ ನೀವು ಯಾವ ಡ್ರೆಸ್ ಹಾಕ್ತೀರಾ ? ಪುಣ್ಯ ರಕ್ಷಿತಾ ಸಾರಿ ಬಗ್ಗೆ ಮಾತ್ರ ಹೇಳಿದ್ಲು.

೨. ಯಾವ ಬ್ಯೂಟಿ ಪಾರ್ಲರ್ ನವರು ನಿಮಗೆ ಮೇಕಪ್ ಮಾಡುತ್ತಾರೆ.? ಇವರಿಗ್ಯಾಕೆ ಅಧಿಕ ಪ್ರಸಂಗ....

ಹೀಗೆ ಅಸಬಂದ್ಧ ಪ್ರಶ್ನೆಗಳೇ ಮುಂದುವರಿದಿತ್ತು. ಇಷ್ಟೊತ್ತಿಗೆ ರೋಸಿ ಹೋದ ಗೆಳೆಯ ಪ್ರಸಾದ್ ಟಿ.ವಿ. ಆಫ್ ಮಾಡಿದ್ದ.

ಕೊನೆ ಮಾತು

ರಕ್ಷಿತಾ - ಪ್ರೇಮ್ ವಿವಾಹದ ಸಮಗ್ರ , ಸಚಿತ್ರ ವರದಿ TV 9 ನಲ್ಲಿ ಮಾತ್ರವಂತೆ ಅಂತಾ ಅವರೇ ಹೇಳ್ತಾ ಇದ್ರೂ.
ಕೆಲ ಪಡ್ಡೆ ಹುಡುಗರು ರಾತ್ತ್ರಿ ೧೨ ಕಳೆದರೂ TV 9 ಮುಂದೆ ಕೂತಿದ್ದರೂ ಆದರೆ ಮದುವೆ ಮಂಟಪದಿಂದ TV 9 ಕ್ಯಾಮಾರ ಪ್ರೇಮ್ ಮನೆಗೆ ಹೋಗಿರಲಿಲ್ಲ.

No comments: