Saturday, December 15, 2012

ಇದನ್ನ ಸೋಮಾರಿತನ ಅಂದುಕೊಳ್ಳುತ್ತೀರಾ? ನಿರ್ಲಕ್ಷ್ಯ ಅಂದರೆ ಸರಿಯೇ.  ಪಬ್ಲಿಕ್ ರಸ್ತೆಯಲ್ಲಿ ಹಂಚಿಕೊಳ್ಳಲಾಗದ( ಖಾಸಗಿ ರಸ್ತೆ ಇದೆಯ) ಕನಸುಗಳನ್ನ ಬರೆಯಲು ಪ್ರಾರಂಭಿಸಿದ್ದು ಬ್ಲಾಗ್. ಅದ್ರೆ ಅದೇನು ಗೊತ್ತಿಲ್ಲ, ಬೆಂಗಳೂರು ಟ್ರಾಫಿಕ್ ಜಾಮ್ ನಂತೆ, ಸದ್ದು, ಸುದ್ದಿ ಎರಡೂ ಇಲ್ಲದೆ ನಿಂತು ಹೋಯ್ತು.
ನನ್ನವರು ಮತ್ತೆ ಬರೆಯಬೇಕು ಅಂದಾಗ........ (ಅವರಿಗೂ ಹೇಳಿ ಹೇಳಿ ಬೇಜಾರಾಗಿದೆ.) ಬರೆಯಬೇಕು ಅನ್ನಿಸಿತು.

--..,
 ಕೇರ್ ಅಂದರೇನು. ಯಾರ ಬಗ್ಗೆ ಯಾರು ಕೇರ್ ತಗೋಬೇಕು. ಪ್ರಿಯತಮೆಯ ಬಗ್ಗೆ ಪ್ರಿಯ. ಪ್ರೀಯನ ಬಗ್ಗೆ ಪ್ರಿಯತಮ.ಅಮ್ಮನ ಬಗ್ಗೆ ಮಗ,ಮಗನ ಬಗ್ಗೆ ಅಮ್ಮ ಹೀಗೆ ಮುಂದುವರಿ ಸಂದರ್ಭಗಳು ಕೇರ್ ಅನ್ನು ನಿರ್ಧರಿಸುತ್ತವೆ ಅನ್ನುವುದು ನಿಜ. ತುಂಬಾ ಮಿಸ್ ಮಾಡ್ಕೋಂಡಾಗ ಸಂದರ್ಭ ಕೇರ್ ಅನ್ನು ನಿರ್ಧರಿಸುವುದು ಎಷ್ಟು ಸರಿ